Sunday, October 31, 2021

ಕನ್ನಡ(ದ) ಕಲಿ (ಯಾಗು) ಮಗುವೆ

ಬರೆದು ಕನ್ನಡದ ಕೈಯಾಗೂ
ಉಲಿದು ಕನ್ನಡದ ಬಾಯಾಗು
ಕೇಳಿ ಕನ್ನಡದ ಕಿವಿಯಾಗು
ಓದಿ ಕನ್ನಡದ ಕಣ್ಣಾಗು
ಮಗು ಕನ್ನಡದ ಕಲಿ ನೀನಾಗು

ಉದಾಸೀನರಿಗೆ ಉರಿಯಾಗು
ಕಿವುಡರಿಗೆ ಜಾಗಟೆಯಾಗು
ಅಂಧರಿಗೆ ಬೆಳಕಾಗು
ಮರೆತವರಿಗೆ ಗುರುವಾಗು
ಮಗು ಕನ್ನಡದ ಕಲಿ ನೀನಾಗು

Tuesday, August 10, 2021

ಮಕ್ಕಳ ಕಾಳಜಿ

ಕತ್ತಲೆಯಲ್ಲಿ ಹೋಗದಿರು
ಗಿಡಗಳನ್ನು ಮುಟ್ಟದಿರು
ಹುಳಗಳಿದ್ದರೆ ಕಚ್ಚುವವು
ಮುಳ್ಳುಗಳಿದ್ದರೆ ಚುಚ್ಚುವವು

ಮಳೆಯಲಿ ನೀನು ನೆನೆಯದಿರು
ಮರಗಳ ಕೆಳಗೆ ನಿಲ್ಲದಿರು
ನೆನೆದರೆ ಮೂಗು ಇಳಿಯುವುದು
ಮರಗಳಿಗೆ ಸಿಡಿಲು ಬಡಿಯುವುದು

ರಣರಣ ಬಿಸಿಲಲಿ ತಿರುಗದಿರು
ಐಸ್ ಕ್ಯಾಂಡಿಯನು ತಿನ್ನದಿರು
ಬಿಸಿಲಲಿ ತಲೆ ಸುತ್ತ ತಿರುಗುವುದು
ಐಸ್ ಕ್ಯಾಂಡಿ ಗಂಟಲು ಕಟ್ಟುವುದು

ಚಳಿಗಾಳಿಯಲಿ ಆಡದಿರು
ಮಣ್ಣಾಟಕೆ ಕೈ ಹಾಕದಿರು
ಚಳಿಯಲಿ ಕೆಮ್ಮುಂಟಾಗುವುದು
ಮಣ್ಣಾಟದಿ ತ್ವಚೆ ಬಿರಿಯುವುದು

ಪಾಲಿಸು ಮೇಲಿನ ಸಲಹೆಗಳ
ಶುಚಿಯಾಗಿಟ್ಟುಕೊ ಕೈಗಳ
ಆರೋಗ್ಯದಿ ನೀ ಬಾಳುವೆ
ಬಲಶಾಲಿಯಾಗಿ ಬೆಳೆಯುವೆ

Saturday, June 5, 2021

ವಿಶ್ವ ಪರಿಸರ ದಿನ

ಇಂದು ವಿಶ್ವ ಪರಿಸರ ದಿನ
ಬಲು ಸೂಕ್ಷ್ಮ ನೈಸರ್ಗಿಕ ವಾತಾವರಣ
ಅಡಗಿದೆ ಅದರೊಳು ಸಮತೋಲನ
ಆಗಲು ಮಾನವನ ಬುದ್ಧಿ ವಿಕಸನ
ತಪ್ಪಿದೆ ಅನಾದಿಕಾಲದ ಸಮತೋಲನ

ನಮ್ಮದು ಕ್ಷಣ ಮಾತ್ರದ  ಜೀವನ
ಕೈಲಾದಷ್ಟು ಗಿಡಮರಗಳ ಬೆಳೆಸೋಣ
ಬಳುವಳಿಯಾಗಿ ಸಿಕ್ಕ ಹಸಿರ ಹೆಚ್ಚಿಸೋಣ
ವಾತಾವರಣದ ಕಾಳಜಿ ಮಾಡೋಣ
ಸಿಕ್ಕಿದ್ದಕ್ಕಿಂತ ಚೆನ್ನಾಗಿಸಿ ಹೊರಡೋಣ

Thursday, May 27, 2021

ಬಲೆ


ಜೀವನದಲಿ ಸಿಕ್ಕಿ ಬಿದ್ದರೆ ಬಲೆಗೆ
ಸತತ ಪ್ರಯತ್ನವು ಬೇಕು ಬರಲು ಹೊರಗೆ
ಶರಣಾಗದಿರಲು ಜಯ ನಿನ್ನದೇ ಕೊನೆಗೆ

Saturday, March 27, 2021

ಚಿಗುರೆಲೆಗಳ ಸಂಸಾರ





ಚಿಗುರೆಲೆಗಳು ಹಾಕಿವೆ ಮದುವೆಯ ಚಪ್ಪರ
ನವಜೀವನಕೆ ಸಜ್ಜಾಗಿ ನಿಂತಿವೆ ಗಿಡಮರ
ಧರಿಸಿವೆ ರಂಗುರಂಗಿನ ಹೂಗಳ ಅಲಂಕಾರ
ಜೇನ್ನೊಣ ಜೀರುಂಡೆಗಳು ಪಠಿಸುತಿವೆ ಮಂತ್ರ
ವಾಲಗದಂತಿದೆ ಹಕ್ಕಿಗಳ ಸುಮಧುರ ಇಂಚರ
ಉದುರಿದ ಹಣ್ಣೆಲೆಗಳು ಉಣಬಡಿಸಿವೆ ರಸಸಾರ
ಚಿಗುರೆಲೆಗಳಿಂದಾಗುತಿದೆ ಹೂ ಪೀಚಿನ ಗೋಚರ
ಮಳೆಗಾಲವಿದ್ದರೂ ಬಲುದೂರ
ಹೂ ಕಾಯಿ ಮಾಡಿರುವವು ಹಣ್ಣಾಗುವ ನಿರ್ಧಾರ
ಹಣ್ಣಿಂದ ಪ್ರಾಣಿ ಪಕ್ಷಿಗಳು ಪೋಷಿಸುವವು ತಮ್ಮ ಉದರ
ಅವು ಪ್ರತ್ಯುಪಕಾರದಿ ಮಾಡುವವು  ಬೀಜಪ್ರಸಾರ
ಮಳೆಬರುವ ಕಾಲಕ್ಕೆ ಚಿಗುರೆಲೆಗಳಾಗುವವು ದಟ್ಟಹಸಿರ
ಕೊಡೆಹಿಡಿದು ಮಾಡುವವು ಮಳೆ ರಭಸವ ದೂರ 
ಮಣ್ಣ ರಕ್ಷಿಸಿ ಏರಿಸುವವು ಭೂಮಿಯ ಜಲಸ್ತರ
ಸೃಷ್ಟಿಸುವವು ತಮ್ಮಡಿಯಲ್ಲಿ ಹೊಸದೊಂದು ತಲೆಮಾರ
ಬೆಳೆಸುವವು ಸಂಸಾರ ಕಾಪಾಡುವವು ಜೀವನದ ಉಸಿರ

Monday, February 15, 2021

ಬಲ್ಲಾಳ ರಾಯನ ದುರ್ಗ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ

ಒಂದು ದಿನದ ಬಲ್ಲಾಳರಾಯನ ದುರ್ಗದ ಚಾರಣ
ಉಣಬಡಿಸಿತು ಪ್ರಕೃತಿ ಸೌಂದರ್ಯದ ಹೂರಣ
ಅಷ್ಟೇನು ಸುಲಭವಲ್ಲದ ಕಾರಣ
ಕೆಲವರಿಗೆ ಅದರಿಂದಾಯಿತು ಹೈರಾಣ
ಮತ್ತೆ ಕೆಲವರಿಗಾಯಿತು ಅದು ಶಕ್ತಿಯ ಮರುಪೂರಣ

ಮನಸೂರೆಗೊಂಡಿತು ಸೂರ್ಯನ ಉದಯ ಕಿರಣ
ಕಣ್ಣನು ತಣಿಸಿದವು ಹಸಿರನುಟ್ಟ ದಿಬ್ಬಗಳ ಗಣ
ಬಂಡಾಜೆ ಜಲಪಾತದ ಶೀತಲ ನೀರಿನ ಸತ್ವಗುಣ
ಮಿಂದವರಿಗೆ ನೀಡಿತು ಹೊಸಚೇತನ
ದಣಿದು ತನ್ನ ನೋಡ ಬಂದವರಿಗೆ ಅದು ನೀಡಿತು ಸಾಂತ್ವನ



ಸೂರ್ಯೋದಯದ ಸುಂದರ ನೋಟ




















ಚಾರಣಕ್ಕೆ ಹಾದಿ








ಚಾರಣಕ್ಕೆ ಹೋಗ ಬಯಸುವವರಿಗೆ ಮಾಹಿತಿ


ರಾಣಿ ಝರಿ ಸ್ಥಳದಿ೦ದ ಕಾಣುವ ವಿಹ೦ಗಮ ದೃಶ್ಯ

ರಾಣಿ ಝರಿ ಸ್ಥಳದಿ೦ದ ಕಾಣುವ ವಿಹ೦ಗಮ ದೃಶ್ಯ


ಕೋಟೆಯ ಕಡೆಗೆ ಹೊರಟಾಗ ಕಾಣುವ ದೃಶ್ಯ



















ಕೋಟೆಯ ಹತ್ತಿರದ ನೋಟ