ಸಿದ್ದೇಶ್ವರನ ಭಕ್ತರ ಸಂಖ್ಯೆ ಅಪಾರ
ಬರಿಗಾಲಿನಲಿ ಹತ್ತಿಳಿವರು ಮೆಟ್ಟಿಲುಗಳ ನೂರಾರ
ಲೆಕ್ಕಿಸದೆ ಬಿರು ಬೇಸಿಗೆಯ ಭಾರ
ಲೆಕ್ಕಿಸದೆ ಬಿರು ಬೇಸಿಗೆಯ ಭಾರ
ಕತ್ತಲೆಯ ಗುಹೆಗಳ ತಾಣ
ನಿಷ್ಯಬ್ದವಾದ ವಾತಾವರಣ
ನೀಡುವುದು ತಪಸ್ವಿಗಳಿಗೆ ಬೇಕಾದ ಕಣ
ನೀಡುವುದು ತಪಸ್ವಿಗಳಿಗೆ ಬೇಕಾದ ಕಣ
ಇಲ್ಲಿ ಸ್ವರ್ಣಮುಖಿ ನದಿ ಉದಿಸುವುದು ಮಳೆಗಾಲಕೆ
ಬೆಟ್ಟದ ಮೇಲಿದೆ ಕುರಂಗರಾಯನ ಕೋಟೆಯ ಪಳಿಯುಳಿಕೆ
ಕಲ್ಯಾಣಿ ಹಾಗೂ ಕಲ್ಲಿನಲಿ ಕೊರೆದ ಬಾವಿ ನೀರಿನ ಸಂಗ್ರಹಕೆ
ಕಲ್ಯಾಣಿ ಹಾಗೂ ಕಲ್ಲಿನಲಿ ಕೊರೆದ ಬಾವಿ ನೀರಿನ ಸಂಗ್ರಹಕೆ
ಬೆಂಕಿ ಬೀಳದಂತೆ ಕಾಡಿನ ರಕ್ಷಣೆ
ಭಕ್ತರ ಅನುಕೂಲತೆಗಳ ಸುಧಾರಣೆ
ಸಾಕು ಹೆಚ್ಚಿಸಲು ಇಲ್ಲಿನ ಆಕರ್ಷಣೆ
ಸಾಕು ಹೆಚ್ಚಿಸಲು ಇಲ್ಲಿನ ಆಕರ್ಷಣೆ
2 comments:
Nice. Good job.
ಮೂರ್ನಾಲ್ಕು ಸಾಲುಗಳಲ್ಲಿ ನೂರಾರು
ಮಾತು ಹೇಳುವ ಸುಂದರ ಬರಹ
Post a Comment