ಇದು ರಸಸಿದ್ಧರ ಗುಹೆಗಳ ಬೀಡು
ಇಲ್ಲಿದೆ ಔಷಧೀಯ ಸಸ್ಯಗಳ ಕಾಡು
ರಸದೌತಣ ನೀಡುವ ಹಕ್ಕಿಗಳ ಹಾಡು
ಸಿದ್ದೇಶ್ವರನ ಭಕ್ತರ ಸಂಖ್ಯೆ ಅಪಾರ
ಬರಿಗಾಲಿನಲಿ ಹತ್ತಿಳಿವರು ಮೆಟ್ಟಿಲುಗಳ ನೂರಾರ
ಲೆಕ್ಕಿಸದೆ ಬಿರು ಬೇಸಿಗೆಯ ಭಾರ
ದೊಣೆಯ ಸತ್ವಯುತ ನೀರಿನ ಸ್ನಾನ
ಬೆಟ್ಟದ ಸಿದ್ದೇಶ್ವರ ಸ್ವಾಮಿಯ ದರ್ಶನ
ಕೊಡುವುದು ನಂಬಿದವರ ರೋಗಗಳಿಗೆ ಉಪಶಮನ
ಕತ್ತಲೆಯ ಗುಹೆಗಳ ತಾಣ
ನಿಷ್ಯಬ್ದವಾದ ವಾತಾವರಣ
ನೀಡುವುದು ತಪಸ್ವಿಗಳಿಗೆ ಬೇಕಾದ ಕಣ
ಇಲ್ಲಿ ಸ್ವರ್ಣಮುಖಿ ನದಿ ಉದಿಸುವುದು ಮಳೆಗಾಲಕೆ
ಬೆಟ್ಟದ ಮೇಲಿದೆ ಕುರಂಗರಾಯನ ಕೋಟೆಯ ಪಳಿಯುಳಿಕೆ
ಕಲ್ಯಾಣಿ ಹಾಗೂ ಕಲ್ಲಿನಲಿ ಕೊರೆದ ಬಾವಿ ನೀರಿನ ಸಂಗ್ರಹಕೆ
ಬೆಂಕಿ ಬೀಳದಂತೆ ಕಾಡಿನ ರಕ್ಷಣೆ
ಭಕ್ತರ ಅನುಕೂಲತೆಗಳ ಸುಧಾರಣೆ
ಸಾಕು ಹೆಚ್ಚಿಸಲು ಇಲ್ಲಿನ ಆಕರ್ಷಣೆ