ಒಂದು ದಿನದ ಬಲ್ಲಾಳರಾಯನ ದುರ್ಗದ ಚಾರಣ
ಉಣಬಡಿಸಿತು ಪ್ರಕೃತಿ ಸೌಂದರ್ಯದ ಹೂರಣ
ಅಷ್ಟೇನು ಸುಲಭವಲ್ಲದ ಕಾರಣ
ಕೆಲವರಿಗೆ ಅದರಿಂದಾಯಿತು ಹೈರಾಣ
ಮತ್ತೆ ಕೆಲವರಿಗಾಯಿತು ಅದು ಶಕ್ತಿಯ ಮರುಪೂರಣ
ಮನಸೂರೆಗೊಂಡಿತು ಸೂರ್ಯನ ಉದಯ ಕಿರಣ
ಕಣ್ಣನು ತಣಿಸಿದವು ಹಸಿರನುಟ್ಟ ದಿಬ್ಬಗಳ ಗಣ
ಬಂಡಾಜೆ ಜಲಪಾತದ ಶೀತಲ ನೀರಿನ ಸತ್ವಗುಣ
ಮಿಂದವರಿಗೆ ನೀಡಿತು ಹೊಸಚೇತನ
ದಣಿದು ತನ್ನ ನೋಡ ಬಂದವರಿಗೆ ಅದು ನೀಡಿತು ಸಾಂತ್ವನ
![]() |
ಸೂರ್ಯೋದಯದ ಸುಂದರ ನೋಟ |